ಖುಷ್ವಂತ್ ಸಿಂಗ್ (ಪಂಜಾಬಿ:ਖ਼ੁਸ਼ਵੰਤ ਸਿੰਘ ಜನನ:ಫೆಬ್ರವರಿ ೨,೧೯೧೫) ಸ್ವತಂತ್ರ ಭಾರತದ ಅಗ್ರಗಣ್ಯ ಸಾಹಿತಿ ಹಾಗೂ ಪತ್ರಕರ್ತರಾಗಿದ್ದಾರೆ. ಪಂಜಾಬ್ನ ಹದಲಿ ಗ್ರಾಮ(ಈಗ ಪಾಕಿಸ್ತಾನದಲ್ಲಿದೆ)ದಲ್ಲಿ ಜನಿಸಿದ 'ಖುಷ್ವಂತ್ ಸಿಂಗ್', ಭಾರತದ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಸತ್ಯ, ಸಾಮಾಜಿಕ ಕಳಕಳಿ, ಮೊನಚಾದ ಹಾಸ್ಯ, ಜೀವನಪ್ರೀತಿ ಮತ್ತು ಕಾಮ-ಇವೇ ಮುಂತಾದ ರೂಪಗಳನ್ನು ಅವರ ಬಹುತೇಕ ಬರಹಗಳಲ್ಲಿ ಕಾಣಬಹುದಾಗಿದೆ. ಇದಲ್ಲದೆ, ಭಾರತದ ಜನಪ್ರಿಯ ಹಾಗೂ, ಅತಿ ಹೆಚ್ಚು ಪ್ರಸಾರದ 'ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ ವಾರ ಪತ್ರಿಕೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದ್ದಾರೆ. ಪದ್ಮವಿಭೂಷಣ ಗೌರವವೂ ಸಹ ದೊರೆತಿದೆ. == ಖುಷ್ವಂತ್ ಸಿಂಗ್ ಬರೆದ ಸುಪ್ರಸಿದ್ದ ಪುಸ್ತಕಗಳು == 'ಟ್ರೇನ್ ಟು ಪಾಕಿಸ್ತಾನ್', 'ದಿಲ್ಲಿ', 'ದಿ ಕಂಪೆನಿ ಆಫ್ ವುಮೆನ್' == ಪುರಸ್ಕಾರಗಳು == ಭಾರತ ಸರ್ಕಾರದ ಪದ್ಮಭೂಷಣ (೧೯೭೪ರಲ್ಲಿ) ಸುಲಭ್ ಇಂಟರ್ ನ್ಯಾಶನಲ್ ದಿಂದ 'ವರ್ಷದ ಪ್ರಾಮಾಣಿಕ ವ್ಯಕ್ತಿ' (೧೯೯೮ರಲ್ಲಿ) ಪಂಜಾಬ್ ಸರ್ಕಾರದ ಪಂಜಾಬ್ ರತ್ನ (೨೦೦೬ರಲ್ಲಿ) ಭಾರತ ಸರ್ಕಾರದ ಪದ್ಮ ವಿಭೂಷಣ (೨೦೦೭ರಲ್ಲಿ) == ನಿಧನ == ೨೦೧೪ ರ, ಮಾರ್ಚ್, ೨೦ ರ ಮದ್ಯಾನ್ಹ, ೯೯ ವರ್ಷ ಪ್ರಾಯದ ಖುಷ್ವಂತ್ ಸಿಂಗ್, ನಿಧನರಾದರು. ಮೃತರು, ಓರ್ವ ಪುತ್ರ, ರಾಹುಲ್, ಮತ್ತು ಪುತ್ರಿ, ಮಾಲಾರನ್ನು ಅಗಲಿ ಹೋಗಿದ್ದಾರೆ. ಅವರ ಅಂತ್ಯ ಸಂಸ್ಕಾರ, ೨೦ ರ ಸಂಜೆ, ದಯಾನಂದ ಮುಕ್ತಿಧಾಮ ಚಿತಾಗಾರದಲ್ಲಿ ನಡೆಯಿತು. == ಬಾಹ್ಯ ಸಂಪರ್ಕಗಳು == ಜೀವನ ಪ್ರೀತಿ ಕಲಿಸಿದ ಖುಷ್ವಂತ್ ಅಜ್ಜ ಇನ್ನಿಲ್ಲ ಸಾಹಿತ್ಯ ವಿಶ್ವಕೋಶದಲ್ಲಿ ಖುಷ್ವಂತ್ ಸಿಂಗ್ ಮಾಹಿತಿ ಖುಷ್ವಂತ್ ಸಿಂಗ್ ಜೊತೆ ಸಂದರ್ಶನ == ಉಲ್ಲೇಖಗಳು == < >/